Showing posts with label Journey. Show all posts
Showing posts with label Journey. Show all posts

Friday, May 21, 2010

ನಿದ್ರೆ ಕೆಡಿಸಿದ ವಿಷಯ

ನನ್ನ ಬದುಕಿನಲ್ಲಿ ಮರೆಯಲಾಗದ ದಿನವಾದು, ಹೌದು ಅಂದು ಸಂಕಸ್ಟಿ, ಆ ವೇಳೆಗಾಗಲೇ ಗಣೇಶನ ದರ್ಶನ ಮಾಡಿ , ದೇವರಿಗೆ ಹರಕೆ ಹೊತ್ತು ರೂಮಿಗೆ ಬಂದಿದ್ದೆ. ಅದೇ ಸಮಯಕ್ಕೆ ಸರಿಯಾಗಿ ಮನೆಯಿಂದ ಫೋನ್ ಬಂತು. ಫೋನಿನಲ್ಲಿ ಹಾರಿ ಬಂದ ಸಂದೇಶವೇನು ಗೊತ್ತಾ ? ನೀನು ಪಾಸ್ ಆಗಿದ್ದೀಯ ಅಂತ.

ಹೌದು ಎಲ್ಲರೂ ಪ್ರತಿ ವರ್ಷ ಒಂದು ತರಗತಿ ಪಾಸಾಗಿ ಮತ್ತೊಂದು ತರಗತಿಗೆ ಹೋಗ್ತಾರೆ. ಅದ್ರಲ್ಲಿ ಏನು ವಿಶೇಷ ? ವಿಶೇಷ ಇದೆ. ಅಂದು ನಾನು ಬರಿ ಪಾಸಾಗಿರಲಿಲ್ಲ,ಓದಿನಲ್ಲಿ ಮೊದಲ ಸಲ ಫೈಲ್ ಆಗಿ ಪಾಸಾಗಿದ್ದೆ. ಆ ಫೋನ್ ಕರೆ ೨ ತಿಂಗಳು ಅನುಭವಿಸಿದ ಮಾನಸಿಕ ಯಾತನೆಗೆ ಅಂತ್ಯ ಹೇಳಿತ್ತು.

ಹತ್ತನೆ ತರಗತಿಯಲ್ಲಿ ಉತ್ತಮ ಅಂಕಗಳಿಸಿ ಪಾಸಾದ ಮೇಲೆ ಸಹಜವಾಗಿಯೇ ನನ್ನ ಮೇಲೆ ಮನೆಯವರೆಲ್ಲರ ನಿರೀಕ್ಷೆ ಹೆಚ್ಚಾಯಿತು. ಮನೆಯಲ್ಲೇ ಅತ್ಯಂತ ಬುದ್ದಿವಂತನೆಂಬ ಹಣೆಪಟ್ಟಿ ನನ್ನದಾಯ್ತು. PUC ಯಲ್ಲಿ ವಿಜ್ಞಾನ ವಿಷಯವನ್ನ ತೆಗೆದುಕೊಂಡಿದ್ದೆ. ಮೊದಲ ಸಲ ಆಂಗ್ಲ ಮಾದ್ಯಾಮವಾದ್ದರಿಂದ ಮೊದಲ ಕೆಲವು ದಿನಗಳು ಕಷ್ಟವಾಯ್ತು. ನಿಧಾನವಾಗಿ ಅದಕ್ಕೆ ಹೊಂದಿಕೊಂಡಿದ್ದೆ. ಮೊದಲ ವರ್ಷ ಎಲ್ಲವೂ ಸರಿಯಾಗೇ ಇತ್ತು. ನಿಧಾನವಾಗಿ ೨ ನೇ ವರ್ಷ ಓದಿನಲ್ಲಿನ ಆಸಕ್ತಿ ಕಡಿಮೆಯಾಗಿತ್ತು. ಇದಕ್ಕೆ ಕಾರಣಗಳು ಹಲವು. ಕಾರಣಗಳೇನೇ ಇರಲಿ, ಇಲ್ಲಿಯವರೆಗೆ ಅನುತ್ತೀರ್ಣನಾಗದೆ ಇದ್ದ ನನ್ನ ಮೇಲೆ ನಿರೀಕ್ಷೆ ಸಹಜವಾಗಿಯೇ ಹೆಚ್ಚಿಗೆ ಇತ್ತು.

ಆ ದಿನ ಬಂದೇ ಬಿಟ್ಟಿತು, ೨ನೇ ವರ್ಷದ ಪಾಲಿತಾಂಶ ಪ್ರಕಟವಾಯ್ತು. ಎಲ್ಲರ ನಿರೀಕ್ಷೆಯನ್ನ ನಾನು ಹುಶಿ ಮಾಡಿದ್ದೆ. ನನ್ನ ಜೀವನದಲ್ಲಿ ಮೊದಲನೆ ಬಾರಿ ಓದಿನಲ್ಲಿ ಫೈಲ್ ಆಗಿದ್ದೆ. ಅಂದು ಇಂದಿನಂತಲ್ಲ. ಒಮ್ಮೆ ಫೈಲ್ ಆದರೆ ಮುಗಿಯಿತು, ಮುಂದಿನ ತರಗತಿಗಳಿಗೆ ಹೋಗಬೇಕಾದರೆ ಒಂದು ವರ್ಷ ಕಾಯಬೇಕು. ಮತ್ತೊಮ್ಮೆ ಪರೀಕ್ಷೆ ಬರೆಯಬೇಕು ಎಂದರೆ ಅಕ್ಟೋಬರ್ ವರೆಗೆ ಕಾಯಲೇ ಬೇಕು. ಒಂದು ವರ್ಷ ವೇಸ್ಟ್ ಆಗೊದನ್ನ ತಪ್ಪಿಸೋದಕ್ಕೆ ಸಾದ್ಯ ಇರಲಿಲ್ಲ.

ತುಂಬಾನೇ ಬೆಜಾರಾಯ್ತು. ನಾನು ಫೈಲ್ ಆಗಿದ್ದ ವಿಷಯವನ್ನ ಮನೆಯವರಿಗೆ ಹೇಗೆ ಹೇಳೋದು?? ನಿಜ ಹೇಳೋದಕ್ಕೆ ನನ್ನಿಂದ ಸಾದ್ಯವಿರಲಿಲ್ಲ. ಅದಕ್ಕೆ ಇರಬೇಕು ಮನೆಯಲ್ಲಿ ನಾನು ಪಾಸ್ ಆಗಿದ್ದೇನೆಂದು ಸುಳ್ಳು ಹೇಳಿ ಮತ್ತೊಂದು ತಪ್ಪು ಮಾಡಿದ್ದೆ. ನಿಜ ಹೇಳಿ ತಪ್ಪೊಪ್ಪಿಕೊಂಡಿದ್ದರೆ ಮನಸ್ಸಿನ ಅರ್ಧ ಭಾರವನ್ನ ಕೆಳಗಿಳಿಸುತ್ತಿದ್ದೆ. ಆದರೆ ನಿಜ ಹೇಳಲು ದರ್ಯ ಸಾಕಾಗಿರಲಿಲ್ಲ. ಮನೆಯಲ್ಲಿ ಸುಳ್ಳು ಹೇಳಾಗಿದೆ, ಆದರೆ ಇಂದಲ್ಲ ನಾಳೆ ನಿಜ ಗೊತ್ತಾಗುತ್ತದೆ ಎಂಬ ಹೆದರಿಕೆಯಿಂದ ಮನಸ್ಸಿನಲ್ಲೇ ತುಂಭ ಹಿಂಸೆ ಅನುಭವಿಸಿದ್ದೆ.

ಒಂದು ವರ್ಷ ಹಾಳಾಗದಂತೆ ಉತ್ತೀರ್ಣನಾಗಲು ಏನಾದರೂ ಮಾರ್ಗ ಇದೆಯೇ ಎಂದು ವಿಚಾರಿಸಿದೆ. ಅದಕ್ಕೆ ರೀಕೌಂಟಿಂಗ್ & ರಿವ್ಯಾಲ್ಯೂಯೇಶನ್ ೨ ಆಯ್ಕೆಗಳಿದ್ದವು. ರೀ ಕೌಂಟಿಂಗ್ಗೆ ೫೦ ಹಾಗೂ ರೀ ವ್ಯಾಲ್ಯುವೇಶನ್ ಗೆ ೫೦೦ ರೂಪಾಯಿಗಳನ್ನ ಕಟ್ಟಬೇಕಿತ್ತು. ರೀ ಕೌಂಟಿಂಗಲ್ಲಿ ಪಾಸ್ ಆಗೋ ಸಂಭವ ಕಡಿಮೆಯಿರುವದರಿಂದ ರೀ ವ್ಯಾಲ್ಯುವೇಶನ್ಗೇ ಹಾಕಬೇಕೆಂದು ನಿರ್ಣಯಿಸಿದೆ. ಮನೆಯಲ್ಲಿ ಪಾಸ್ ಆಗಿದ್ದೇನೆಂದು ಸುಳ್ಳು ಹೇಳಿದ್ದರಿಂದ ೫೦೦ ರೂಪಾಯಿಗಳನ್ನ ಹೇಗೆ ಕೇಳುವದು? ಯಾಕೆಂದು ಕೇಳಿದರೆ ಏನು ಹೇಳುವದು ಅಂತ ಗೊತ್ತಾಗದೇ ಪೇಚಾಡಿದ್ದೆ. ಯಾರಿಗೂ ತಿಳಿಯದಂತೆ ಮನೆಯಿಂದ ೫೦೦ ರೂಪಾಯಿ ಹಣವನ್ನ ಕದ್ದು ರೀ ವ್ಯಾಲ್ಯುವೇಶನ್ಗೆ ಕಟ್ಟಿದ್ದೆ.

ಮುಂದೇನು ಮಾಡುತ್ತಿಯ ಎಂದು ಕೇಳಿದವರಿಗೆಲ್ಲಾ, ಇಂಜಿನಿಯರಿಂಗ್ ನನಗೆ ಇಸ್ಟವಿಲ್ಲ ಎಂದು, ಕಂಪ್ಯೂಟರ್ ಕೋರ್ಸ್ ಮಾಡುತ್ತೇನೆ ಎಂದು ಹೇಳಿದ್ದೆ. ಅದರಂತೆ ಧಾರವಾಡಕ್ಕೆ ತೆರಳಿ ಕಂಪ್ಯೂಟರ್ ಕೋರ್ಸ್ ಸೇರಿಕೊಂಡೆ. ಆದರೆ ಅದೇನೇ ಮಾಡಿದರು ಸುಳ್ಳು ಹೇಳಿ ತಪ್ಪು ಮಾಡಿದೆನಲ್ಲಾ, ಸದಾ ನನ್ನ ಒಳಿತನ್ನೇ ಬಯಸಿದ ಮನೆಯವರಿಗೆ ಸುಳ್ಳು ಹೇಳಿದೆನಲ್ಲಾ ಎಂಭ ಪಾಪ ಪ್ರಜ್ಞೆ ಸದಾ ನನ್ನ ಕಾಡುತ್ತಿತ್ತು. ಇದೇ ಯೋಚನೆಯಲ್ಲಿ ಅದೆಸ್ಟೊ ನಿದ್ದೆಯಿಲ್ಲದ ರಾತ್ರಿಗಳನ್ನ ಕಳೆದಿದ್ದೇನೆ. ಅದಕ್ಕೆ ಹೇಳುವದು ನಿದ್ದೆ ಕೆಡಿಸುವಂತ ಕೆಲಸವನ್ನ ಯಾವತ್ತೂ ಮಾಡಬಾರದೆಂದು.

ಈಸ್ಟೆಲ್ಲಾ ಆದರೂ ರೀ ವ್ಯಾಲ್ಯುವೇಶನ್ನಲ್ಲಿ ಪಾಸಾಗುತ್ತೇನೆಂಬ ಒಂದು ನಂಭಿಕೆ ನನ್ನಲ್ಲಿ ಬಲವಾಗಿತ್ತು. ಅದೇ ದರ್ಯ ನನ್ನನ್ನ ಸ್ವಲ್ಪ ಸಮಾದಾನವಾಗಿಟ್ಟಿತ್ತು. ಅದೇ ಅಶೆಯಲ್ಲಿ CET ಕೂಡ ಬರೆದಿದ್ದೆ.

ದೇವರು ನನ್ನ ಕೈ ಬಿಡಲಿಲ್ಲ. ನಾನು ರೀ ವ್ಯಾಲ್ಯುವೇಶನ್ನಲ್ಲಿ ಪಾಸಾಗಿದ್ದೆ. ೫ ಅಂಕ ಹೆಚ್ಚಿಗೆ ಬಂದಿತ್ತು. ನಾನು ಧಾರವಾಡದಲ್ಲಿದ್ದುದರಿಂದ ಕಾಲೇಜ್ ನಿಂದ ಮನೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆಗಲೇ ಮನೆಯವರಿಗೆ ನಿಜವಾದ ವಿಷಯ ತಿಳಿದಿದ್ದು. ನೇರವಾಗಿ ಮೊದಲು ಕಾಲೇಜ್ಗೆ ಹೋಗಿ ನನ್ನ ಮಾರ್ಕ್ಸ್ ರೆಕಾರ್ಡ್ ತೆಗೆದುಕೊಂಡೆ. ಪಾಸಾಗಿದ್ದರಿಂದ ರೀ ವ್ಯಾಲ್ಯುವೇಶನ್ಗೆ ಕಟ್ಟಿದ ೫೦೦ ರೂಪಾಯಿ ತಿರುಗಿ ಬಂದಿತ್ತು. ಜೊತೆಯಲ್ಲೇ CET ಪಾಲಿತಾಂಶ ಕೂಡ ಬಂದಿತ್ತು. ಅದರಲ್ಲಿ ಉತ್ತಮ ಅಂಕ ಗಳಿಸಿದ್ದೆನಾದರೂ ನನಗೆ ಈಸ್ಟೆಲ್ಲಾ ತೊಂದರೆ ಕೊಟ್ಟ ಜೀವಶಾಸ್ತ್ರ ವಿಷಯವನ್ನ ಪ್ರಧಾನವಾಗಿ ತೆಗೆದುಕೊಂಡು BSc. ಓದಿದೆ.

Thursday, September 25, 2008

My Journey...

ಬಹಳ ದಿನಗಳಾಯ್ತು ಏನಾದ್ರು ಬರಿಯೋಣ ಅಂತ ಅಂದುಕೊಳ್ತಾ ಇದ್ದೆ ಅದಕ್ಕೆ ಇಂದು ಸಮಯ ಸಿಕ್ತು.ಬರಿಯೋದೆಲ್ಲ ಹೌದು ಆದ್ರೆ ಏನು ಬರಿಯೋದು ಅಂತ ಯೋಚಿಸದೆ ಸ್ಟಾರ್ಟ್ ಮಾದುತ್ತಿದ್ದೇನೆ .. ನೋಡೋಣ ಇದು ಎಲ್ಲಿಗೆ ಹೋಗಿ ತಲುಪೊತ್ತೆ ಅಂತ...ನನ್ನಬಗ್ಗೆ ಹೇಳುವಂತದ್ದು ಏನು ಇಲ್ಲ.. ಆದರೂ ನಾನು ನಡೆದು ಬಂದ ದಾರಿಯ ಬಗ್ಗೆ ಚಿಕ್ಕದಾಗಿ ಬರೆಯಲು ಪ್ರಯತ್ನಿಸುತ್ತೇನೆ...
ಯಲ್ಲಾಪುರ ತಾಲೂಕಿನ ಬಿಸ್ಗೋಡು ಎನ್ನೋ ಪುಟ್ಟ ಗ್ರಾಮ ಅಲ್ಲಿ ಬೋಳ್ಗುಡ್ಡೆ ಅನ್ನೋ ತುಂಬಿದ ಮನೆಯಲ್ಲಿ ನನ್ನ ಬಾಲ್ಯ ಕಳದಿದ್ದು, ಅಣ್ಣ ದತ್ತಾತ್ರೇಯ, ತಂಗಿ ಸಾವಿತ್ರಿ , ಅಪ್ಪ ಶಿವರಾಮ ಭಟ್ , ಅಮ್ಮ ಸೀತಾ ಭಟ್ ಹಾಗು ಅಜ್ಜ ಅಜ್ಜ್ಜಿಯರ ಜೊತೆಯಲ್ಲಿ. ಉದ್ಯೋಗ ಕ್ರಷಿ. ಮುಖ್ಯ ಬೆಳೆ ಅಡಿಕೆ,ತೆಂಗು,ಬಾಳೆ ಹಾಗು ಬತ್ತ. ಮನೆಯಲ್ಲಿ ಎಲ್ಲರ ಪ್ರೀತಿಯವನಾಗೆ ಹೊರಗಿನ ಪ್ರಪಂಚದ ಅರಿವಿಲ್ಲದಂತೆ ಬಾಲ್ಯವನ್ನು ಕಳೆದೆ. ೧೦ ನೇ ತರಗತಿಯ ವರೆಗಿನ ವಿಧ್ಯಾಬ್ಯಾಸ ಎಲ್ಲ ಬಿಸಗೋಡಿನಲ್ಲೇ ಮುಗಿಯಿತು. ನಂತರದ ೨ ವರ್ಷ 2nd PU. ಓದಿದ್ದು ಯಲ್ಲಾಪುರದಲ್ಲಿ.
ಮೊದಲ ಸಲ ಮನೆಯಿಂದ ಹೊರಗಡೆ ಹೋಗಿದ್ದು BSc. ಓದೋದಕ್ಕೆ ಧಾರವಾಡಕ್ಕೆ ಹೋದಾಗ.. ಇಲ್ಲಿಯವರೆಗೆ ಮನೆ ಬಿಟ್ಟು ೧ ದಿನವು ಹೊರಗಡೆ ಉಳಿದದ್ದೇ ಇಲ್ಲ.. ಯಾರದೇ ನೆಂಟರು/ಗೆಳೆಯರ ಮನೆಗೂ ಹೋಗಿದ್ದು ಬಹಳ ಕಡಿಮೆ. ಅದಕ್ಕೆ ಇರಬೇಕು ಮೊದಲಿನಿಂದಲೂ ವಿದ್ಯಾಭ್ಯಾಸದಲ್ಲಿ ಸೈ ಅನಿಸಿಕೊಂಡಿದ್ದ ನಾನು ಇಲ್ಲಿ ಮೊದಲಬಾರಿಗೆ ಓದಿನಕಡೆ ಅಷ್ಟಾಗಿ ಗಮನ ಕೊಡಲಿಲ್ಲ. ಆದರು ಹೇಗೋ ಗೆಳಯರ ಸಹಾಯದಿಂದ ಡಿಗ್ರಿ ಮೂರೇ ವರ್ಷದಲ್ಲಿ ಮುಗಿಸಿದೆ. ಧಾರವಾಡ ನನ್ನ ಪಾಲಿಗೆ ಬಹಳಷ್ಟು ವಿಷಯವನ್ನ ಕಲಿಸಿಕೊಟ್ಟ ಸ್ಥಳ. ಮೊದಲ ಬಾರಿಗೆ ನಾನು ಹೊರಜಗತ್ತನ್ನು ನೋಡಿದಂತಹ ಸ್ಥಳ. ಅದಕ್ಕೆ ಇರಬೇಕು ನಮ್ಮೂರಿನ ನಂತರ ನಾನು ಇಷ್ಟ ಪಡುವಂತಹ ಸ್ಥಳ ಇದು.
ನಾನು MCA ಓದಿದ್ದು ಬೆಳಗಾವಿಯ KLE ಇಂಜಿನಿಯರಿಂಗ್ ವಿದ್ಯಾ ಸೌಸ್ಥೆಯಲ್ಲಿ. ನನಗೆ ಇಲ್ಲಿ ಹೆಚ್ಚಿಗೆ ಏನೂ ತೊಂದರೆ ಅನ್ನಿಸಲಿಲ್ಲ.. ನಾನು ಇಲ್ಲಿಗೆ ಬರುವಾಗ ನನಗಾಗಲೇ ನನ್ನ ತಪ್ಪಿನ ಅರಿವಾಗಿತ್ತು. ನಾನು ಇಲ್ಲಿ ಓದಿನಲ್ಲಿ ಹೆಚ್ಚಿನ ಶ್ರದ್ದೆ ವಹಿಸಿದೆ, ಉತ್ತಮ ಶ್ರೇಣಿಯಲ್ಲಿ ಕೂಡ ಪಾಸಾದೆ.ನಾನು ಇಲ್ಲಿ ಗಳಿಸಿದ ಅತ್ಯುತ್ತಮ ಆಸ್ತಿ ಎಂದರೆ ನನ್ನ ಗೆಳೆಯರು. ಜೀವದ ಗೆಳೆಯರು.. ಜೀವಕ್ಕೆ ಜೀವ ಕೊಡುವಂತವರು..
ಬೆಳಗಾವಿಯಿಂದ ನೇರ ಬಂದಿದ್ದು ಬೆಂಗಳೊರಿಗೆ. ಮೊದಲ ಬಾರಿ ಏನೇನೋ ನಿರೀಕ್ಷೆಯನ್ನು ಇಟ್ಟುಕೊಂಡು ರಾಜಧಾನಿಗೆ ಬಂದಿದ್ದೆ. ಅತ್ತಮ ಅಂಕಗಳನ್ನು ಗಳಿಸಿದ್ದೇನೆ, ಕೆಲಸಕ್ಕೆ ಏನು ಮೋಷ ಇಲ್ಲ ಅಂದು ಕೊಂಡಿದ್ದೆ. ಇಸ್ಟೆಲ್ಲಾ ನಿರೀಕ್ಷೆಯಲ್ಲಿ ಬಂದ ನಮಗೆ ಇಲ್ಲಿ ಮೊದಲು ಸಿಕ್ಕಿದ್ದು ಕೇವಲ ನಿರಾಶೆ,ಹತಾಶೆ... ಕೆಲಸವಿಲ್ಲದೆ ಕಳೆದಂತಹ ಆ ದಿನಗಳು, ಎಂದೆಂದಿಗೂ ಮರೆಯಲಾರದಂಥ ದಿನಗಳು. ಇಲ್ಲಿ ಮತ್ತೆ ನನ್ನ ಸಹಾಯಕ್ಕೆ ನಿಂತವರು ಅದೇ ನನ್ನ ಗೆಳೆಯರು..
ಮೊದಲ ಬಾರಿಗೆ ನಾನು ಕೆಲಸ ಸೇರಿದ್ದು ಅಪೂರ್ವ ಇನ್ಫೊ ಸಿಸ್ಟಂ ಅನ್ನೋ ಜಯನಗರದ ಒಂದು ಚಿಕ್ಕ ಕಂಪನಿಯಲ್ಲಿ. ನನ್ನಪಾಲಿಗೆ ಹೇಳಬೇಕಾದರೆ Well beginning is half done ಅನ್ನೋ ಹಾಗೆ ಸ್ವಲ್ಪ ತಡವಾದರೂ ಉತ್ತಮ ಪ್ರಾರಂಭವೇ ಸಿಕ್ಕಿತು. ಇಲ್ಲಿ ಸೇರಿ ಮೂರನೇ ತಿಂಗಳಿಗೆ ನನಗೆ ಸಿಕ್ಕ ಮೊದಲ ಸಂಭಾವನೆ ರೂ. ೩೦೦೦. ನನಗೆ ಕೊಟ್ಟ ಕೆಲಸವನ್ನ ಶ್ರದ್ದೆಯಿಂದ ಮಾಡಿದೆ, ಬಹಳಸ್ತು ವಿಷಯಗಳನ್ನು ಕಲಿತೆ. ಇದು ನನ್ನ ಎಲ್ಲ ಮುಂದಿನ ಸಾಧನೆಗೆ ಅಡಿಪಾಯವಾಯ್ತು ಅನ್ನೋದಕ್ಕೆ ಎರಡು ಮಾತಿಲ್ಲ.
ಇಲ್ಲಿಂದ ಮುಂದಿನ journey ದುಬೈಗೆ, ಪೆರೋಟ ಸಿಸ್ಟೆಮ್ಸ್ ಅನ್ನೋ ಕಂಪನಿಗೆ ಸೇರಿದ ಒಂದೇ ವಾರದಲ್ಲಿ ದುಬೈಗೆ ಪ್ರಯಾಣ , ಮೊದಲ ಬಾರಿಗೆ ವಿದೇಶ ಪ್ರಯಾಣ ತುಂಬಾನೇ ಹೆದರಿಕೆ ಇತ್ತು. ಆದ್ರೆ ಕೆಲವೇ ದಿನಗಳಲ್ಲಿ ನನ್ನ ಪಾಲಿಗೆ ಇದು ಇನ್ನೊಂದು ಬೆಂಗಳೊರೆ ಆಗಿ ಹೋಯ್ತು. ದುಬೈ ನ Emirats airline ನಲ್ಲಿ ಕೆಲಸ. ಇದು ಪ್ರಪಂಚದ ಅತ್ಯಂತ ಪ್ರಶಿದ್ದ ವಿಮಾನಗಳಲ್ಲಿ ಒಂದು. ಇಲ್ಲಿ ಎಲ್ಲರು ನಮ್ಮವರೇ, ಅದರಲ್ಲೂ ನನ್ನಂತಹ ಹುಡುಗರ ದೊಡ್ಡ ಗುಂಪೇ ಅಲ್ಲಿತ್ತು. ಬಿಡುವಿನ ಸಮಯದಲ್ಲಿ ಸಮೀಪದ ಎಲ್ಲ ಪ್ರದೇಶಗಳಿಗೆ ಹೋಗುತ್ತಿದ್ದೆವು. ಇಂದಿಗೂ ಇವೆಲ್ಲ ನನಗೆ ಕಣ್ಣಿಗೆ ಕಟ್ಟಿದಂತಿದೆ. ನನಗೆ ಈ ದುಬೈನ ಒಂದು ವರ್ಷದ ಅವಧಿ ಒಂದು ಇತಿಹಾಸಿಕ ತಿರುವು. ಅಲ್ಲಿ ನನ್ನನ್ನು ಮನೆಯನ್ನೇ ಮರೆಯುವಂತೆ ಆದರಾತಿಥ್ಯ ನೀಡಿದ, ಅಲ್ಲಿ ನೆಲೆಸಿದ ಹವ್ಯಕ ಮಿತ್ರರನ್ನು ನಾನೆಂದೂ ಮರೆಯಲು ಸಾದ್ಯವೇ ಇಲ್ಲ.