Friday, November 06, 2009

ನಮಗೆ ಇಂತವರು ಬೇಕಾ???

ಕಳೆದ ಕೆಲವು ದಿನಗಳಿಂದ ಕರ್ನಾಟಕದ ರಾಜಕೀಯ ನಾಟಕ ನೋಡಿದರೆ, ಮೈಯೆಲ್ಲಾ ಉರಿಯುತ್ತದೆ. ಅದ್ಯಾವುದೋ ದೊರೆ ದೇಶ ಹೊತ್ತಿ ಉರಿತಿದ್ದರೆ ಬೆಚ್ಚಗೆ ಚಳಿ ಕಾಸ್ತಿದ್ನಂತೆ ಅನ್ದಾಂಗೆ ನಮ್ಮ ಜನ ಪ್ರತಿನಿದಿಗಳು ತಮ್ಮ ಕರ್ತವ್ಯ ಮರೆತು ಆರಾಮಾಗಿ ಹೈದರಾಬಾದ್, ಗೋವಾ , ಡೆಲ್ಲಿ ಅಂತ ಮೋಜು ಮಾಡ್ತಿದ್ದಾರೆ. ಉತ್ತರ ಕರ್ನಾಟಕ ನೆರೆ ಪರಿಹಾರ ನಡಿಬೇಕಗಿತ್ತು; ಆದ್ರೆ ಇವ್ರಿಗೆ ಅದರ ಬಗ್ಗೆ ಕಾಳಜಿನೆ ಇಲ್ಲ. ಇವ್ರಿಗೆ ಆರ್ಸಿ ಕಳಿಸಿದ ಜನಕಿಂತ ಅಧಿಕಾರ, ಹಣ, ಒಣ ಪ್ರತಿಷ್ಠೆಯೇ ಮುಖ್ಯವಾಗಿದೆ.

ಒಂದುಕಡೆ ದುಡ್ಡಿದ್ರೆ ಏನು ಬೇಕಾದರು ಮಾಡಬಹುದು ಅಂತ ಅಂದ್ಕೊಂಡಿರೋ ರೆಡ್ಡಿ ಬ್ರದರ್ಸ್, ಮತೊಂದೆಡೆ ನಾನೇ ಸರ್ವಾಧಿಕಾರಿ ಅಂತ ಅಂದ್ಕೊಂಡಿರೋ ಯಡ್ಡಿ. ಇವ್ರಿಗೆಲ್ಲ ತಮ್ಮ ಕೆಲಸ ಏನು , ಯಾಕೆ ಜನ ನಮ್ಮ ಆರಿಸಿ ಕಳ್ಸಿರೋದು ಅಂತ ಏನಾದ್ರು ಜ್ಞಾನ ಇದೆ ಅಂತಿರ? ಇದ್ದಿದ್ರೆ ಖಂಡಿತ ಹೀಗೆ ಮಾಡ್ತಿರಲಿಲ್ಲ..

ಇದು ಒಬ್ಬ ,ಇಬ್ಬರ ಜಗಳ ಅಲ್ಲ, ನಮ್ಮ ಎಲ್ಲ ರಾಜಕಾರಣಿಗಳ ಕಥೆ. ಇಲ್ಲಿ ಯಾರು ಸಾಛಾರಿಲ್ಲ. ನಮ್ಮ ಗುರುಗಳೊಬ್ಬರು ಹೇಳ್ತಿದ್ದರು, ರಾಜ ಕಾರಣ ಅಂದ್ರೇನೆ ಹಾಗೆ , ಇಲ್ಲಿ ಯಾರು ಒಳ್ಳೆವರು ಅಂತ ನೋಡೋದಕ್ಕೆ ಆಗೋದಿಲ್ಲ , ಕಡಿಮೆ ಕೆಟ್ಟವರು ಯಾರು ಅಂತ ನೋಡ್ಬೇಕಗೊತ್ತೆ ಅಂತ.. ಆದ್ರೆ ಇವತ್ತು ಅಂತವರೂ ಸಿಗೋದಿಲ್ವಲ್ಲ ಅನ್ನೋ ಹಾಗಾಗಿದೆ. ಹಾಗಿದ್ದರೆ ಇದಕ್ಕೆಲ್ಲ ಪರಿಹಾರವೇ ಇಲ್ವಾ? ನಮ್ಮ ದೇಶ, ರಾಜ್ಯಗಳು ಇಂತ ದುಷ್ಟ ರಾಜಕಾರಿಣಿಗಳ ಕೈಯಲ್ಲೇ ಇರಬೇಕಾ?? ಇದಕ್ಕೆಲ್ಲ ಪರಿಹಾರ ಎಂದು?? ಇದ್ದರೆ ಹೇಗೆ? ಏನು ?

ನಂಗೆ ಅನಿಸೊತ್ತೆ ನಮ್ಮ ದೇಶದ ರಾಜಕೀಯದಲ್ಲಿ ಈ ಕೆಲವು ಬದಲಾವಣೆಗಳಾಗಬೇಕಿದೆ...
೧. ಚುನಾವಣೆಗೆ ನಿಲ್ಲಬೇಕಾದರೆ ಅಬ್ಯರ್ಥಿ ಕನಿಷ್ಠ ಪದಿವಿಯನ್ನಾದ್ರು ಓದಿರಬೇಕು.
೨.ಅಬ್ಯಾರ್ಥಿಯ ಒಟ್ಟು ಆದಾಯ ೧ ಕೋಟಿ ದಾಟಿರಬಾರದು.
೩ ಒಬ್ಬ ವ್ಯಕ್ತಿ ರಾಜಕೀಯದಲ್ಲಿ ಗರಿಷ್ಠ ೨ ಅವಧಿಗೆ ಮಾತ್ರ ಇರಬುದು. ನಂತರ ಕಡ್ಡಾಯವಾಗಿ ನಿವ್ರತ್ತರಾಗಬೇಕು
೪ ಯಾವುದೇ ಕ್ರಿಮಿನಲ್ ಅಪರಾದದ ಹಿನ್ನೆಲೆ ಇರಬಾರದು
೫ ರಾಜಕಾರಣಿಗಳಿಗೆ ಕಾರ್ಯಾಂಗ ಮತ್ತು ನ್ಯಾಯಾಂಗಗಳ ಮೇಲೆ ಯಾವುದೇ ಅಧಿಕಾರ ಇರಬಾರದು.
೬ ಎಲ್ಲದಕಿಂತ ಮುಖ್ಯವಾಗಿ ಕಡ್ಡಾಯ ಮತದಾನವಾಗಬೇಕು.

Monday, November 02, 2009

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ನವೆಂಬರ್ ೧, ಕನ್ನಡ ರಾಜ್ಯೋತ್ಸವ, ಬೆಳಿಗ್ಗೆ ೭ ಗಂಟೆಯ ಸಮಯ, ನನ್ನ ಗೆಳಯ ಸತೀಶನ ಕರೆ ಬರ್ತಾ ಇತ್ತು, ಆ ಕಡೆಯಿಂದ "ಹಲೋ" ಎಂದು ಹೇಳುತ್ತಿದ್ದಂತೆ , ನಮಸ್ಕಾರ ಎಂದೇ , ಇವತ್ತು ನಮ್ಮ ಚಲುವ ಕನ್ನಡ ರಾಜ್ಯೋತ್ಸವ ನಾವು ಇವತ್ತಿನ ದಿನ ಯಾವುದೇ ಆಂಗ್ಲ ಭಾಷೆಯ ಶಬ್ಧಗಳನ್ನ ಬಳಸದೆ ಮಾತಾಡೋಣ ಎಂದೇ. ಅದಕ್ಕೆ ಅವನು "ಓಕೆ " ಅಂತಿದ್ದಂತೆ, ಓಕೆ ಅಲ್ಲ ಮಾರಾಯ , ಸರಿ ಅಂತ ಬಯ್ದು ಮಾತು ಮುಂದುವರಿಸಿದೆವು. ಅವನಿಗೆ ಮದುವೆ ಬಟ್ಟೆ ತೆಗೆದು ಕೊಳ್ಳಲು ಜಯನಗರಕ್ಕೆ ಹೋಗಬೇಕಾಗಿತ್ತು. ಸರಿ ಹೋಗೋಣ ಎಂದೆ.

ನಮ್ಮ ವಾಹನಕ್ಕೆ ಕನ್ನಡ ಬಾವುಟವನ್ನ ಹಾಕಿಕೊಂಡು ಹೊರಟೆವು. ಅಲ್ಲಿ ಇನ್ನು ಕೆಲವು ಸ್ನೇಹಿತರು ನಮ್ಮನ್ನ ಕೂಡಿಕೊಂಡರು. ಎಲ್ಲರು ೧೦೦ಕ್ಕೆ ೧೦೦ ಪ್ರತಿಶತ ಕನ್ನಡ ಪದಗಳನ್ನೇ ಬಳಸಬೇಕೆಂದು ಮಾತಾಡಿಕೊಂಡೆವು. ಅವರಲ್ಲಿ ಒಬ್ಬನ ಹೆಸರು FS paatil , ಅವನಿಗೆ ಪಶಿ. ಪಾಟಿಲ್ ಅಂತ ಮರು ನಾಮಕರಣ ಮಾಡಿದೆವು.

ನಮ್ಮಲ್ಲಿ ಎಲ್ಲರು ಒಂದಿಲ್ಲೋಮ್ಮೋ ಆಂಗ್ಲ ಪದಗಳನ್ನ ಬಳಸೇ ಬಿಡುತ್ತಿದ್ದರು, ಒಬ್ಬರ ತಪ್ಪನ್ನು ಒಬ್ಬರು ಸರಿಮಾಡುತ್ತ ಸಾಗಿತ್ತು ನಮ್ಮ ಕರೀದಿ. ಎಲ್ಲರಿಗೂ ಒಂದಿಲೊಂದು ಪದಗಳ ಅರ್ಥ ತಕ್ಷಣಕ್ಕೆ ನೆನಪಿಗೆ ಬರುತ್ತಿರಲಿಲ್ಲ. ಆಗಲೇ ಗೊತ್ತಾಗಿದ್ದು ನಮ್ಮ ಕನ್ನಡ ಎಷ್ಟರ ಮಟ್ಟಿಗೆ ಶುದ್ದವಗಿದೆ ಮತ್ತು ಅದೆಸ್ಟು ಬೇರೆ ಬಾಷೆಗಳ ಪ್ರಭಾವಕ್ಕೆ ಒಳಗಾಗಿದೆ ಎಂದು. ಒಂದೂ ಆಂಗ್ಲ ಭಾಷೆಯ ಪದಗಳನ್ನ ಬಳಸದೆ ಮಾತಾಡುವ ಯಕ್ಷಗಾನ ಕಲಾವಿದರನ್ನ ನೆನಸಿಕೊಂಡೆ.

ಇನ್ನು ಅಲ್ಲಿನ ಅಂಗಡಿಯಲ್ಲಿರುವವರೆಲ್ಲ ಆಂಗ್ಲ ಬಾಷೆಯಲ್ಲೇ ನಮ್ಮನ್ನ ಸ್ವಾಗತಿಸುತ್ತಿದ್ದರು. ಅವರಿಗೆಲ್ಲ ಕನ್ನಡ ಬರುತ್ತಿತ್ತು. ನಾವು ಕನ್ನಡ ಮಾತಾಡಿದ ಮೇಲೆ ಕನ್ನಡದಲ್ಲಿ ಮಾತಾಡಲು ಪ್ರಾರಂಭಿಸುತ್ತಿದ್ದರು. ಇನ್ನು ಅದೆಸ್ಟೋ ಪದಗಳ ಅರ್ಥ ನಮಗೂ ಗೊತ್ತಿಲ್ಲದೆ ನಾವೇ ಮರುನಾಮಕರಣ ಮಾಡಿಕೊಳ್ಳಬೇಕಾಗಿತ್ತು.

ಇದಕ್ಕೆಲ್ಲ ಕಾರಣಗಳೆನಪ್ಪ ಅಂತಾ ಯೋಚಿಸುತ್ತಿದ್ದೆ , ಮುಖ್ಯವಾಗಿ ಗಮನಿಸಿದ್ದು, ಕನ್ನಡ ಮಾತಾಡಿದರೆ ತಮ್ಮ ದರ್ಜೆ ಕಡಿಮೆಯಾಗುತ್ತದೆ ಅಂತ ಜನರು ಭಾವಿಸುವದು; ಆಂಗ್ಲ ಬಾಷೆಯ ಮೇಲಿನ ಪ್ರೇಮ ಮತ್ತು ಬರುತ್ತದೆ ಎಂದು ತೋರಿಸಿಕೊಳ್ಳುವದು ಅನ್ನಿಸಿತು.

ನಾನು ಸಮಸ್ತ ಕನ್ನಡಿಗರಲ್ಲಿ ಕೇಳಿ ಕೊಳ್ಳುವದೆನೆಂದರೆ , ನಾವು ಕನ್ನಡಿಗರು ಮತ್ತು ನಮ್ಮ ಕನ್ನಡ ಭಾಷೆ ಯಾವುದಕ್ಕಿಂತ ಕಡಿಮೆಯಿಲ್ಲ. ನಾವು ನಮ್ಮ ಭಾಷೆಯನ್ನ ಗೌರವಿಸೋಣ; ಪ್ರೀತಿಸೋಣ. ಹಾಗಂತ ಇತರ ಭಾಷೆಗಳನ್ನ ದ್ವೇಷಿಸಿ ಅಂತ ನಾನು ಹೇಳುತ್ತಿಲ್ಲ , ನಮ್ಮ ಭಾಷೆ ನಮಗೆ ತಾಯಿ ಇದ್ದಂತೆ, ಅಂದರೆ ತಾಯಿಯ ಗೌರವ ಕೊಟ್ಟು ಕಾಪಾಡೋಣ.
ಸಮಸ್ತ ಕನ್ನಡ ಕುಲ ಕೋಟಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಸಿರಿಗನ್ನಡಂ ಗೆಲ್ಗೆ; ಸಿರಿಗನ್ನಡಂ ಬಾಳ್ಗೆ.